ಸಿದ್ಧರಾಮಯ್ಯ ಆಡಳಿತ : ನೀತಿ ನಿರ್ಧಾರ’ ತಾತ್ವಿಕ ವಿವೇಚನೆ

Author : ಲಕ್ಷ್ಮಣ ಕೊಡಸೆ

₹ 500.00




Year of Publication: 2022
Published by: ಜನಮನ ಪ್ರತಿಷ್ಠಾನ
Address: ಜನಮನ ಪ್ರತಿಷ್ಠಾನ ,ಬೆಂಗಳೂರು

Synopsys

ಸಿದ್ಧರಾಮಯ್ಯ ಆಡಳಿತ : ನೀತಿ ನಿರ್ಧಾರ’ ಗ್ರಂಥವು ಲಕ್ಷಣ ಕೊಡಸೆ ಅವರು ಸಂಪಾದಿಸಿರುವ ಗ್ರಂಥವಾಗಿದೆ. ಅವರು ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಜನರಿಗಾಗಿ ರೂಪಿಸಿದ ಯೋಜನೆಗಳು, ಆ ಯೋಜನೆಗಳ ಹಿಂದಿನ ಸೈದ್ಧಾಂತಿಕ ನಿಲುವಿನಲ್ಲಿದ್ದ ಜನಪರ ಕಾಳಜಿ ಮತ್ತು ಅನುಷ್ಠಾನ ಬದ್ಧತೆ, ಆ ಮೂಲಕ ರಾಜ್ಯ ಪಡೆದುಕೊಂಡ ಚಲನಶೀಲತೆ ಹಾಗೂ ಆ ಚಲನಶೀಲತೆಯ ಗತಿಯಲ್ಲಿನ ಪ್ರಗತಿಯ ಸಾಧಕ ಬಾಧಕಗಳ ವಸ್ತುನಿಷ್ಠ ಅವಲೋಕನಗಳನ್ನು ಈ ಗ್ರಂಥ ಒಳಗೊಂಡಿದೆ. ಆಸಕ್ತರಿಗೆ ಪರಾಮರ್ಶನ ಕೈಪಿಡಿಯಾಗಿಯೂ, ಮುಂದಿನ ದಿನಗಳಿಗೆ ಐತಿಹಾಸಿಕ ದಾಖಲೆಯಾಗಿಯೂ ಉಳಿಯುತ್ತದೆ ಎಂಬುವುದು ಈ ಗ್ರಂಥ ಪ್ರಕಟಣೆಯ ಹಿಂದಿರುವ ಆಶಯ.

About the Author

ಲಕ್ಷ್ಮಣ ಕೊಡಸೆ
(12 April 1953)

ಕತೆಗಾರ, ಪತ್ರಕರ್ತ ಲಕ್ಷ್ಮಣ ಕೊಡಸೆ ಅವರು 1953 ಏಪ್ರಿಲ್ 12ರಂದು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಕೊಡಸೆ ಗ್ರಾಮದಲ್ಲಿ ಜನಿಸಿದರು. ತಾಯಿ ಭರ್ಮಮ್ಮ, ತಂದೆ ಕರಿಯನಾಯ್ಕ. ಹುಟ್ಟೂರು ಹಾಗೂ ಹೊಸನಗರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪ್ರಜಾವಾಣಿಯಲ್ಲಿ ಉಪಸಂಪಾದಕರಾಗಿ, ಮುಖ್ಯವರದಿಗಾರರಾಗಿ ಸುದ್ದಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ.  ‘ಅಪ್ಪನ ಪರಪಂಚ, ಕೊಡಚಾದ್ರಿ, ಸಹಪಥಿಕ, ಅವ್ವ, ಬಿ. ವೆಂಕಟಾಚಾರ್ಯ, ಕುವೆಂಪು ಮತ್ತು, ಕನ್ನಡ ವಿಮರ್ಶಾ ವಿವೇಕ, ಹಾಯಿದೋಣಿ’ ಅವರ ಪ್ರಮುಖ ಕೃತಿಗಳು.    ...

READ MORE

Related Books